ಅಹರ್ನಿಶಿ ಪ್ರಕಾಶನ ಹೊರ ತಂದಿರುವ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಬಂಜಗೆರೆ ಜಯಪ್ರಕಾಶ್ ಅವರು 'ಕನ್ನಡದಲ್ಲಿ ಕಾಡುಗೊಲ್ಲ ಸಮುದಾಯದ ಪಾತ್ರಗಳನ್ನು, ಆ ಸಮುದಾಯದ ಜೀವನ ವೃತ್ತಾಂತವನ್ನು ಭಿತ್ತಿಯನ್ನಾಗಿಸಿಕೊಂಡು ಬಂದಿರುವ ಮೊದಲ ಕಾದಂಬರಿ ಇದು. ಗೊಲ್ಲಕುಲದ ಒಂದು ಕಾಲಘಟ್ಟವನ್ನು ತಮ್ಮ ಕಣ್ಮುಂದೆ ಸಜೀವವಾಗಿ ತಂದು ನಿಲ್ಲಿಸಿದ ಮಂಗಳ ಅವರ ಬರವಣಿಗೆಯ ಸಾಮರ್ಥ್ಯಕ್ಕೆ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆ' ಎಂದಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ವೀ.ಚಿ.ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿವೆ.